“ಬಿಟ್ಟುಹೋಗಬೇಡ
ಇಲ್ಲೆ ಸುಳಿಯುತ್ತಿದೆ ನಿನ್ನ ಭೂತ"
ಮನೆ ಹೇಳುತ್ತಿದೆ
ನನಗೆ.
“ಬಾ ನನ್ನ ಹಿಂಬಾಲಿಸು
ಮುಂದೆ ಇದೆ ಭವಿಷ್ಯ”
ಹಾದಿ ಹೇಳುತ್ತಿದೆ
ನನಗೆ.
ಎರಡಕ್ಕೂ ನಾನೆನ್ನುವೆ
“ಭೂತವಿಲ್ಲ ನನಗೆ
ಭವಿಷ್ಯವೂ ಇಲ್ಲ
ನಿಂತರಿಲ್ಲಿ ನಾನು
ನಿಲುವಿನಲ್ಲೆ ಪ್ರಯಾಣವಿದೆ.
ಹೊರಟು ಬಿಟ್ಟೆನೆನ್ನಿ, ಆ ಪ್ರಯಾಣದಲ್ಲೆ ನಿಲುಗಡೆ."
ಬದಲಿಸುತ್ತವೆ ಎಲ್ಲ
ಕೇವಲ ಸಾವು ಮತ್ತು ಪ್ರೀತಿ ಮಾತ್ರ
ಬದಲಿಸುತ್ತವೆ ಎಲ್ಲ
ಕೇವಲ ಸಾವು ಮತ್ತು ಪ್ರೀತಿ ಮಾತ್ರ
ಮೂಲ - ಖಲೀಲ್ ಗಿಬ್ರಾನ್
ಅನುವಾದ - ಶ್ರೀಧರ ಹೆಗ್ಗೋಡು
ಅನುವಾದ - ಶ್ರೀಧರ ಹೆಗ್ಗೋಡು
ಅನುವಾದಕರ ಹೆಸರೇ ಇಲ್ಲ!!!!
ReplyDelete