ಕಾಳೊಂದನ್ನು ಹೊತ್ತ ಇರುವೆ
ಜಾರು ನೆಲದ ಮೇಲೆ ಓಡುತ್ತಿದೆ ಅವಸರಿಸಿ
ಗೋದಾಮಿನ ರಾಶಿ ಚೀಲಗಳ ನಡುವೆ
ಇಲ್ಲದೆ ಸುತ್ತಲಿನ ಧಾರಾಳತೆಯ ಪರಿವೆ.
ಹೊತ್ತ ಕಾಳೊಂದು ಮಾತ್ರ ಇದೆಯಿಲ್ಲಿ
ಪ್ರೀತಿಸಲು ಎಂದದರ ಎಣಿಕೆ.
ಹಾಗೆಯೇ ನಾವೂ
ಕಣ ಬಿತ್ತೊಂದನ್ನು ಹೆಕ್ಕಿ
ಭಕ್ತರಾಗಿ ಬಿಡುತ್ತೇವೆ.
ಈ ದೇಹ, ಆ ದಾರಿ ಯಾ ಒಬ್ಬ ಗುರು.
ನೋಡು ಸ್ವಲ್ಪ ದೂರ, ವಿಸ್ತಾರ.
ನೋಟವೇ ಪ್ರತಿ ಜೀವಿಯ ಸಾರವಾದಾಗ
ಯಾವ ಸಾರವನ್ನು ತುಂಬಿಕೊಳ್ಳುತ್ತದೋ ಜೀವಿ
ಅದಕ್ಕೆ ಅದೇ ರೂಪ. ದೇವ, ದಾನವ!
ಹೂಜಿಯಲ್ಲೆ ತುಳುಕಿ ಹರಿಯುತ್ತದೆ ಸಾಗರ,
ಮೀನೊಳಗೇ ಈಜುತ್ತಿದೆ ಕಡಲೆನ್ನಲಡ್ಡಿಯಿಲ್ಲ
ಈ ಗೂಢದ ಅರಿವೆ ಶಾಂತಿ ನೀಡಿ ಹಂಬಲಕ್ಕೆ
ಮಾಡುತ್ತದೆ ಅರವಟ್ಟಿಗೆಯನ್ನೆ ಮನೆಯ ತೆಕ್ಕೆ.
ರೂಮಿಯ T H E R O A D H O M E ದ ಭಾವಾನುವಾದ
-ಶ್ರೀಧರ ಹೆಗ್ಗೋಡು.
-ಶ್ರೀಧರ ಹೆಗ್ಗೋಡು.
ಭಾವಾನುವಾದ ತುಂಬ ಚಂದ ಆಗಿದೆ....liked it..
ReplyDeleteಧನ್ಯವಾದಗಳು.
Delete