Wednesday, March 27, 2013

ವಿಸ್ತಾರ



ನಮ್ಮ ಕೊಲೆಗಡುಕನ ಮಿತ್ರರು ನಾವು
ಸಾಗರದಲೆಗಳಿಗೆ ನಮ್ಮನ್ನ ಬಲಿಕೊಡುವವನ
ಮಿತ್ರರು ನಾವು.

ಪ್ರೀತಿಸುತ್ತೇವೆ ನಾವು ಸಾವನ್ನು.
ದೂರ  ಇಡು ಅದನ್ನು ಇವತ್ತೊಂದು ದಿನ
ಮತ್ತೆ ನಾಳೆ ಎನ್ನುವುದು ನಮ್ಮ ಮೂಢತನ ಮಾತ್ರ.
ಕತ್ತಿಯಲುಗಿನಿಂದ ದೂರ  ಓಡಬೇಡ.

ಭಯಂಕರನಂತೆ ಕಾಣುತ್ತಿರಬಹುದು ಆ ಮಿತ್ರ
ಆದರೆ ನಿನ್ನ ಆತ್ಮಕ್ಕೆ ವಿಸ್ತಾರ ನೀಡುವವ ಅವ,
ಕಾಡ ಪ್ರಪಾತದಂಚಿಗೆ ತಂದು ನಿನ್ನ ಗರುಡನ ರೆಕ್ಕೆ
ಗಾಳಿಗೊಡ್ಡಿ ಹಾರಿಬಿಡುವವನೂ ಅವ.

ಶಿಲುಬೆ ಮೇಲಿನ ಏಸು,
ಕಣೆಯ ಮಂಚದ ಭೀಷ್ಮ.
ಆ ಅಸಂಗತ ಮರಣದಂಡನೆಗಳು
ಯಾವುದೋ ಗೂಢ ಹೊತ್ತುಕೊಂಡಿವೆ.

ಪ್ರತಿಯೊಂದು ಕ್ಷಣದಲ್ಲೂ ಅವರೇನು ಮಾಡುತ್ತಿದ್ದಾರೆ
ಮತ್ತೆ ಯಾಕೆ ಎನ್ನುವುದು ಅವರಿಗೆ ಗೊತ್ತಿದೆ
ಎಂದು ಕಣ್ಣುಮುಚ್ಚದ ಸಿನಿಕರು ವಾದಿಸುತ್ತಾರೆ.

ಅರ್ಪಿಸಿಕೋ ಪ್ರೇಮಕ್ಕೆ ಯೋಚಿಸದೆ ಹಿಂದುಮುಂದು
ಇವತ್ತು ಮುಂಜಾನೆ ಸೂರ್ಯ ಮೂಡಿ ಬೇಕಾಬಿಟ್ಟಿ
ನಮ್ಮ ದೀಪ-ಚುಕ್ಕೆಗಳ ಮನಸ್ಸನ್ನು ನಂದಿಸಿದಂತೆ.

ರೂಮಿಯ “ಮೋರ್ ರೇಂಜ್” ಕವನದ ಭಾವಾನುವಾದ
ಅನುವಾದ: ಶ್ರೀಧರ ಹೆಗ್ಗೋಡು

No comments:

Post a Comment