Sunday, October 4, 2015

ರಕ್ಷೆ

ಬೇಕಿಲ್ಲ ಹುಲುಮಾನವರ ರಕ್ಷಣೆ ಧಮ೯ಕ್ಕೆ
ಬೇಕಿದೆ ರಕ್ಷಣೆ
ಮಾಡದ ತಪ್ಪಿಗೆ ಕುರೂಪಿಯಾಗುತ್ತಿರುವ
ಅಮಾಯಕ ಯುವತಿಯರಿಗೆ!

ಬೇಕಿಲ್ಲ ರಕ್ಷೆ ಗಡಿ ಬೇಲಿ ಮುಳ್ಳ ಬಲೆಗೆ ,
ನಡುರಾತ್ರಿ ಬಂದೆರಗುವ ಗುಂಡು
ಸುರಿಮಳೆಯಿಂದ ಬೆಚ್ಚಿಬೀಳುವ 
ನೆರೆಹೊರೆಗೆ ಬೇಕಿದೆ ರಕ್ಷೆ.

ಬೆವರ ಹನಿಸುರಿಸಿ ಬಂಗಾರ ಬೆಳೆವ
ರೈತ ಕುಸಿದು ಕುಳಿತಾಗ
ಬೇಕಿದೆ ಅವಗೆ ರಕ್ಷೆ,

ದೇಶ ಬಿಟ್ಟು ಬದುಕ ಹಂಬಲಿಸಿ
ಕಡಲ ದಾಟಿ ತಿಳಿಯದೂರಿಗೆ ಬರುವ
ಬಯಸದ ನೆ೦ಟರಿಗೆ ಬೇಕಿದೆ ರಕ್ಷೆ,

ಬದುಕ ಬಯಸಿ ಸಾಗರದಾಟಲು ಧುಮುಕಿ
ಈಜುವ ಹಸಿ ಕಂದಮ್ಮಗಳ ರಟ್ಟೆಗೆ,
ಧಮ೯ದ ಹೆಸರಲ್ಲಿ  ದೇಶ ದೇಶವನ್ನೇ ಸುಡುವ ರಕ್ಕಸ ಕೃತ್ಯಕ್ಕೆ ಬಲಿಯಾಗಿ ಜೀವವನ್ನೇ ಪಣಕ್ಕಿಟ್ಟು ಬದುಕ ಬಯಸಿ
ಹುಟ್ಟು ನೆಲ ಬಿಟ್ಟು ಭವಿಷ್ಯದ ಕನಸ ನನಸಾಗಿಸಲು ಹೊರಟ ಜನರಿಗೆ ಬೇಕಿದೆ ರಕ್ಷೆ.

No comments:

Post a Comment