ಹೊಸ ವರುಷ ಬರುತಿದೆ!
ವಿದಾಯ ಹೇಳುವ ಮುನ್ನ ಒಮ್ಮೆ ದಿಟ್ಟಿ ಹಾಯಿಸಿ ನೋಡಿದೆ!
ಮತ್ತಷ್ಟು ನರೆತ ಕೂದಲು,
ಬೆನ್ನು ಸ್ವಲ್ಪ ಬಾಗಿದ ಹಾಗಿದೆ,
ಎದುರು ಇರುವುದೇನೂ ಕಾಣದು,
ಕಿವಿಗೋ ಬರಿ ಪರಾಕು ಮಾತ್ರ ಕೇಳುವುದು,
ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳಿಗೆ
ನಡೆದಿದೆ ಕವಾಯತು!
ಪಂಚ ಇಂದ್ರಿಯಕ್ಕೂ !
ಪ್ರಜೆ ಪ್ರಭುತ್ವಕ್ಕೆದುರು ನುಡಿಯುವ೦ತಿಲ್ಲ.
ಬೆರಳು ತೋರಿಸುವಂತಿಲ್ಲ , ನಾಯಕರು
ಹೊಣೆಯಲ್ಲ ಯಾವುದಕ್ಕೂ !
ಅಂತೂ ದೇಶ ಅರೆಶತಮಾನದ ಬಳಿಕ
ಪ್ರಪಂಚಕ್ಕೆ ರತ್ನಗಂಬಳಿ ಹಾಸಿ ಕರೆಯುತ್ತಿದೆ
ಬನ್ನಿ ನಿಮ್ಮ ದೇಶದಲ್ಲಿ ಮಾಡಲಾಗದ
ಎಲ್ಲಾ ಪ್ರಯೋಗ ಇಲ್ಲಿ ಮಾಡಿ!
ಕೇಳುವವರಾರು? ಎಲ್ಲರೂ ಹೇಳುವವರೇ!
ನನ್ನ ಪ್ರೇಮ ಹೊರಗೆ ತೋರುವಂತದ್ದಲ್ಲ,
ನಾ ಹುಟ್ಟಿ ಬೆಳೆದ ನೆಲ ನನ್ನ ರೂಪಿಸಿದೆ.
ನಾ ಯಾರಿಗೂ ತೋರಿಸಬೇಕಾಗಿಲ್ಲ.
No comments:
Post a Comment