Saturday, December 16, 2017

ಕವನಗಳು.

ನನಗೆ ಗಾಳಿಯಾಗುವ ಬಯಕೆ!
ಅದೂ ಕ್ಷಣಮಾತ್ರವಾದರೂ ನಿನ್ನೊಡಗೂಡಿ,
ಯಾರ ಗಮನಕ್ಕೂ ಬಾರದೆಯೆ
ಆದರೆ ಎಲ್ಲರಿಗೂ ಬೇಕಾಗಿ!


ನೀನು ಒಳ್ಳೆಯವನಾಗಬೇಕೆಂದಿಲ್ಲ,
ಮಂಡಿಯೂರಿ ಕ್ಷಮೆಯಾಚಿಸಬೇಕಿಲ್ಲ, ಗುಡ್ಡ ಬೆಟ್ಟಗಳ ಬರಿಗಾಲಲ್ಲಿ ನಡೆಯಬೇಕಿಲ್ಲ ಪ್ರಾಯಶ್ಚಿತ್ತಕ್ಕೆ,
ನೀನು ಮಾಡಬೇಕಾದದ್ದಿಷ್ಟೆ ನಿನ್ನ ಒಳಗಿನ ಮನಸ ಮಾತಿಗೆ ಕಿವಿಕೊಡು,
ನಿನ್ನವರ ಪ್ರಿತಿಸುವುದ ಕಲಿ. ಸಾಕು.

No comments:

Post a Comment